ಮಕ್ಕಳ ಕಸ್ಟಡಿ ಹಾಗೂ ಭೇಟಿಯ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಹತ್ವದ ಬೆಳವಣಿಗೆಯಾಗಿ, ಕರ್ನಾಟಕ ಹೈಕೋರ್ಟ್, ಕಲ್ಕತ್ತಾ ಹೈಕೋರ್ಟ್ ರೂಪಿಸಿರುವ ಮಕ್ಕಳ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳ ಮಾರ್ಗ ಸೂಚಿಗಳನ್ನು ರಾಜ್ಯದಲ್ಲಿ ಮಧ್ಯಂತರ ವ್ಯವಸ್ಥೆಯಾಗಿ ಅನುಸರಿಸಲು ನಿರ್ದೇ ಶಿಸಿದೆ. ರಾಜ್ಯ ಮಟ್ಟದ ಅಧಿಕೃತ ನಿಯಮಗಳು ರೂಪುಗೊಳ್ಳುವವರೆಗೆ ಈ ಮಾರ್ಗ ಸೂಚಿಗಳು ಅನ್ವಯವಾಗಲಿವೆ.
ಈ ನಿರ್ದೇಶನದ ಉದ್ದೇಶ, ಮಕ್ಕಳ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳ ಪ್ರಕರಣಗಳಲ್ಲಿ ಏಕರೂಪತೆ, ಸ್ಪಷ್ಟತೆ ಮತ್ತು ಮಕ್ಕಳ ಹಿತಾಸಕ್ತಿಯನ್ನು ಕೇಂದ್ರಬಿಂದುಗೊಳಿಸುವ ನ್ಯಾಯಾಂಗ ದೃಷ್ಟಿಕೋ ನವನ್ನು ಬಲಪಡಿಸುವುದಾಗಿದೆ. ಪೋಷಕರ ನಡುವಿನ ದೀರ್ಘಕಾಲದ ನ್ಯಾಯಾಂಗ ವಿವಾದಗಳಿಂದ ಮಕ್ಕಳ ಮೇಲೆ ಉಂಟಾಗುವ ಮಾನಸಿಕ ಪರಿಣಾಮವನ್ನು ಕಡಿಮೆ ಮಾಡುವ ದಿಶೆಯಲ್ಲಿ ಈ ಕ್ರಮ ಮಹತ್ವದ್ದಾಗಿದೆ.
ಈ ನಿರ್ದೇ ಶನವು 2023ರಲ್ಲಿ ದಾಖಲಾದ ಸ್ವಯಂಪ್ರೇರಿತ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನೀಡಲಾಗಿದೆ. ಕಲ್ಕತ್ತಾ ಹೈ ಕೋ ರ್ಟ್ ನಲ್ಲಿ ವಿವಿಧ ಪಾಲುದಾರರ ಸಲಹೆಗಳಿಂದ ರೂಪುಗೊಂಡ ಈ ಮಾರ್ಗ ಸೂಚಿಗಳು, ಮಕ್ಕಳ ಕಲ್ಯಾಣವೇ ಪ್ರಥಮ ಆದ್ಯತೆ ಎಂಬ ತತ್ವವನ್ನು ಆಧಾರವಾಗಿಟ್ಟುಕೊಂಡಿವೆ ಎಂದು ನ್ಯಾಯಾಲಯ ಗಮನಿಸಿದೆ.
ಈ ಪ್ರಕರಣದಲ್ಲಿ ಮಕ್ಕಳ ಹಕ್ಕು ಗಳ ಎನ್ಜಿಒ ಆಗಿರುವ Ayushman Initiative for Child Rights (AIFCR) ಪ್ರಮುಖ ಪಾತ್ರ ವಹಿಸಿದ್ದು, ಕಲ್ಕತ್ತಾ ಹೈಕೋರ್ಟ್ ರೂಪಿಸಿದ ಮಕ್ಕಳ ಕಸ್ಟಡಿ ಹಾಗೂ ಭೇಟಿಯ ಹಕ್ಕುಗಳ ಮಾರ್ಗ ಸೂಚಿಗಳು ಮತ್ತು Parenting Plan 2025 ಅನ್ನು ಕರ್ನಾಟಕದಲ್ಲಿಯೂ ಮಧ್ಯಂತರ ವ್ಯವಸ್ಥೆಯಾಗಿ ಅನುಸರಿಸುವ ಅಗತ್ಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ. ಇದಕ್ಕೆ ಸಂಬಂಧಿಸಿದಂತೆ, ಕರ್ನಾ ಟಕ ಹೈಕೋರ್ಟ್ ಈ ಮಾರ್ಗ ಸೂಚಿಗಳನ್ನು ಕುಟುಂಬ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಧೀಶರು ಹಾಗೂ ಗೃಹಹಿಂಸೆ ಕಾಯ್ದೆ(DV Act) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಿಸುವ ನ್ಯಾಯಾಲಯಗಳಿಗೆ ವಿತರಿಸಲು ಸೂಚಿಸಿದೆ. ಈ ಕ್ರಮದಿಂದ, ಕರ್ನಾಟಕದಾದ್ಯಂತ ಮಕ್ಕಳ ಕಸ್ಟಡಿ ಹಾಗೂ ಭೇಟಿಯ ಹಕ್ಕುಗಳ ಪ್ರಕರಣಗಳಲ್ಲಿ ಸತತತೆ, ಪಾರದರ್ಶಕತೆ ಮತ್ತು ಮಕ್ಕಳ ಹಿತಾಸಕ್ತಿಗೆ ಪ್ರಧಾನ ಸ್ಥಾನ ದೊ ರಕಲಿದೆ ಎಂಬ ನಿರೀಕ್ಷೆಯಿದೆ.
0 Comments