ಜವನೆರ್ ಬೆದ್ರ ಸಂಘಟನೆ ಪ್ರಾಯೋಜಕತ್ವದ 'ಕೃಷ್ಣೋತ್ಸವ' ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡಬಿದ್ರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ 109 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್(ರಿ) ಆಶ್ರಯದಲ್ಲಿ ಪ್ರತಿವರ್ಷ ನಡೆಯುವ 'ಕೃಷ್ಣೋತ್ಸವ' ಕಾರ್ಯಕ್ರಮ ಆಗಸ್ಟ್ 16ರ ಶನಿವಾರ ಮೂಡಬಿದ್ರೆಯ ಅಮರನಾಥ್ ಶೆಟ್ಟಿ ವೃತ್ತದ ಬಳಿ  ನಡೆಯಲಿದ್ದು ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜುಲೈ 7 ರಂದು ಶ್ರೀ ಕ್ಷೇತ್ರ ಪುತ್ತಿಗೆಯಲ್ಲಿ ನಡೆಯಿತು. ಸಾಂಪ್ರದಾಯಿಕವಾಗಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಚೌಟರ ಅರಮನೆಯ ಅನುವಂಶಿಕ ಮುಖ್ಯಸ್ಥರಾದ ಕುಲದೀಪ್ ಎಂ ಚೌಟರು ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿದರು.

ಜವನೆರ್ ಬೆದ್ರ ಫೌಂಡೇಶನ್(ರಿ) ಮೂಡಬಿದ್ರೆ ಇದರ ನೇತೃತ್ವದಲ್ಲಿ ನಡೆಯುವ "ಕೃಷ್ಣೋತ್ಸವ-೨೦೨೫"ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಆನೇಕ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು ಹಾಗೂ ಮುಂದಿನ ಕಾರ್ಯಕ್ರಮ ಯಶಸ್ವಿಯಾಗಲಿ ನಡೆಯಲಿ ಎಂದು ಶುಭಾಶಯ ಕೋರಿದರು. ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಮುಲ್ಕಿ-ಮೂಡುಬಿದ್ರೆ ಕ್ಷೇತ್ರದ ಶಾಸಕರಾದ ಶ್ರೀ ಉಮನಾಥ್ ಕೋಟ್ಯಾನ್ ಅವರು ಮಾತನಾಡಿ 'ಕೃಷ್ಣೋತ್ಸವ 2025'ರ ಕಾರ್ಯಕ್ರಮ ಯಶಸ್ವಿಯಾಗಲಿ ನಡೆಯಲಿ ಹಾಗೂ ನಮ್ಮ ಸಂಪೂರ್ಣ ಬೆಂಬಲ ಈ ಕಾರ್ಯಕ್ರಮಕ್ಕಿದೆ ಎಂದು ಹೇಳಿದರು. ಶ್ರೀ ನಾಗರಾಜ ಪೂಜಾರಿ ಉಪಾಧ್ಯಕ್ಷರು, ಮೂಡುಬಿದ್ರೆ ಪುರಸಭೆ, ಕೆಪಿ ಜಗದೀಶ್ ಅಧಿಕಾರಿ, ಮಯೂರಿ ಸಿಲ್ಕ್ ನ ರಾಜೇಂದ್ರ ಜೈನ್, ಉದ್ಯಮಿ ಗಂಗಾಧರ್ ಶೆಟ್ಟಿ, ರಾಜೇಶ್ ಕೋಟೆಗಾರ್, ಬಂಟರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಹೆಗಡೆ ಶ್ರೀ ಸಾಯಿ ಡೆವಲಪರ್  ಶಿರ್ತಾಡಿಯ ಅಶ್ವಿತ್, ಶ್ರೀ ಪ್ರಶಾಂತ್ ಗುರುಸ್ವಾಮಿ ಒಂಟಿ ಕಟ್ಟೆ, ಮಂಜುನಾಥ ರೈ, ನಾಗವರ್ಮ ಜೈನ್ ಅವರು ಅತಿಥಿಗಳಾಗಿ ಭಾಗವಹಿಸಿದರು.


ಜವನೆರ್ ಬೆದ್ರ ಫೌಂಡೇಶನ್ (ರಿ) ಸ್ಥಾಪಕ/ಅಧ್ಯಕ್ಷ ಅಮರ್ ಕೋಟೆ, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್,  ಟ್ರಸ್ಟಿ ರಂಜೀತ್ ಶೆಟ್ಟಿ ಯುವ ಸಂಘಟನೆ ಸಂಚಾಲಕ ನಾರಾಯಣ ಪಡುಮಲೆ, ಸಹ ಸಂಚಾಲಕ ರಾಜೇಶ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ, ರಕ್ತನಿಧಿ ಸಂಚಾಲಕ ಮನು ಒಂಟಿ ಕಟ್ಟೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಸೌಮ್ಯ ಗಣೇಶ್, ಭಕುತಿ ಭಜನಾ ವೃಂದ ಪ್ರಮುಖರಾದ ಸುಕನ್ಯ, ಅಮಿತಾ ಬನ್ನಡ್ಕ, ಹಾಗೂ ಸಂಘಟನೆ ಸದಸ್ಯರುಗಳಾದ ಲಕ್ಷ್ಮಿ, ರಾಧಾ, ಅಭಿಲಾಶ್, ಗುರು, ಸಚಿನ್ ಪದ್ದೋಡಿ ಶರತ್ ಅಲಂಗಾರು ಹಾಗೂ ಮುಂತಾದರು ಉಪಸ್ಥಿತರಿದ್ದರು ಸಂಘಟನೆಯ ಯುವಜನ ಸಭಾಲಿಕರಣ ಸಂಚಾಲಕ ಸಂದೀಪ್ ಕೆಲಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.


Post a Comment

0 Comments