ಮೂಡುಬಿದ್ರೆ: ಮೂಡುಬಿದ್ರೆಯಲ್ಲಿ ನವ ಚೇತನ ಶಿಬಿರ ಉದ್ಘಾಟನೆ ಏಪ್ರಿಲ್ 5: ಜವನೇರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವಚೇತನ ಶಿಬಿರದ ಉದ್ಘಾಟನಾ ನಡೆಯಿತು , ಯೋಗ ಪ್ರಾಣಾಯಾಮ, ಧ್ಯಾನ , ಜ್ಞಾನ/ ಆಟಗಳು ಹಾಗೂ ತರಬೇತಿ ಐದು ದಿನದ ಶಿಬಿರದಲ್ಲಿ ನಡೆಯಲಿದೆ.
ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕಿ ಸುನಿತಾ ಉದಯ್, ನಿವೃತ್ತ ಶಿಕ್ಷಕಿ ಪ್ರೇಮ ರಾವ್ , ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನ ನಾಯಕ್, ಮಾರ್ಗದರ್ಶಕಿ ಸುಮಲತಾ ಶೆಟ್ಟಿ, ಪ್ರಮುಖರಾದ ಅಮಿತಾ ಬನ್ನಡ್ಕ ,ಸುಕನ್ಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಸಾರಿಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು, 42 ಶಿಬಿರಾರ್ಥಿಗಳು 5 ದಿನಗಳು ನಡೆಯುವ ವಿಶೇಷ ಯೋಗ ಶಿಬಿರದಲ್ಲಿ ಭಾಗವಹಿಸಿ ಹೆಸರು ದಾಖಲಿಸಿದ್ದಾರೆ . ಜವನೆರ್ ಬೆದ್ರ ಫೌಂಡೇಶನ್ (ರಿ)ಅಧ್ಯಕ್ಷ ಅಮರ್ ಕೋಟೆ, ಜವನೆರ್ ಬೆದ್ರ ಯುವ ಸಂಘಟನೆ ಸಂಚಾಲಕ ನಾರಾಯಣ ಪದುಮಲೆ , ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಬಿ ಪೂಜಾರಿ ಉಪಸ್ಥಿತರಿದ್ದರು.
0 Comments