ಮಹಾಶಿವರಾತ್ರಿಯಂದು ಐತಿಹಾಸಿಕ ಕುಂಭಮೇಳ ಸಂಪನ್ನ.! ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಇಷ್ಟು ಕೋಟಿ ಭಕ್ತರೇ.?

ಉತ್ತರಪ್ರದೇಶ: ವಿಶ್ವದ ಅತೀ ದೊಡ್ಡ ಹಬ್ಬ ಎಂಬ ಖ್ಯಾತಿಗೆ ಪ್ರಾತ್ರವಾಗಿರುವ ಕುಂಭ ಮೇಳವು ೪೫ ದಿನಗಳ ಬಳಿಕ ಮಹಾಶಿವರಾತ್ರಿಯಂದು ಸಂಪನ್ನಗೊಂಡಿತು. ವಿಶ್ವದ ಮೂಲೆ ಮೂಲೆಯಿಂದ ಕೋಟ್ಯಾಂತರ ಜನ ಪ್ರಯಾಗ್ ರಾಜದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುಲಕಿತಗೊಂಡರು. ೧೪೪ ವರ್ಷಗಳಿಗೊಮ್ಮೆ ನಡೆಯುವ ಈ ಪೂರ್ಣ ಕುಂಭಮೇಳ ಉತ್ಸವವು ಜನವರಿ ೧೩,೨೦೨೫ರಂದು ಆರಂಭವಾಗಿ ನಿರಂತರ ೪೫ ದಿನಗಳ ಧಾರ್ಮಿಕ ಉತ್ಸವಗಳ ಬಳಿಕ ಫೆಬ್ರವರಿ ೨೬,೨೦೨೫ ರ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿತು.


ಮಹಾಶಿವರಾತ್ರಿಯ ಪುಣ್ಯದಿನದಂದು ಸುಮಾರು  1.53 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಪ್ರಯಾಗ್ ರಾಜ್ ದಲ್ಲಿನ ಮಹಾಕುಂಭಮೇಳಕ್ಕೆ ಉತ್ತರ ಪ್ರದೇಶ ಯೋಗಿ ಅದಿತ್ಯನಾಥ್ ಸರ್ಕಾರ ಸಕಲ ತಯಾರಿಯನ್ನು ನಡೆಸಿತ್ತು. ಸಣ್ಣ ಪುಟ್ಟ ಅವಘಡಗಳನ್ನು ಹೊರತುಪಡಿಸಿ ಯೋಗಿ ಸರ್ಕಾರ ಅತೀ ದೊಡ್ಡ ಧಾರ್ಮಿಕ ಉತ್ಸವವನ್ನು ಯಶಸ್ವಿಯಾಗಿ ನಡೆಸಿತು. 

೪೫ ದಿನಗಳ ಕಾಲ ನಿರಂತರವಾಗಿ ನಡೆದ ಅತೀ ದೊಡ್ಡ ಹಬ್ಬದಲ್ಲಿ ವಿಶ್ವದ ನಾನಾ ಭಾಗಗಳಿಂದ ಸಾಧುಸಂತರು, ಉದ್ಯಮಿಗಳು, ರಾಜಕೀಯ ಗಣ್ಯರುಗಳಂತಹ ವಿವಿಐಪಿಗಳನ್ನೊಂಡಂತೆ ಸುಮಾರು ೬೬.೩೦ ಕೋಟಿಯಷ್ಟು ಜನರು ಈ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ವಿಶ್ವದ ಅತೀ ದೊಡ್ಡ ಹಬ್ಬ ಅಧಿಕೃತವಾಗಿ ಸಂಪನ್ನಗೊಂಡಿದ್ದು ಭಾರತದ ವೈದಿಕತೆಯ ಪರಿಚಯವನ್ನು ವಿಶ್ವಕ್ಕೆ ತೋರಿಸಿಕೊಟ್ಟು ಮತ್ತೊಮ್ಮೆ ಭಾರತ ಎಂದಿಗೂ ವಿಶ್ವಗುರು ಎಂಬುದನ್ನು ಸಾಭೀತುಪಡಿಸಿದೆ. 


Post a Comment

0 Comments