ಬಜ್ಪೆ ಪೋಲಿಸ್ ಠಾಣಾ ವ್ಯಾಪ್ತಿಯ ಎಡಪದವು ಹನುಮಾನ್ ಮಂದಿರದ ಬಳಿ ಸ್ಕೂಟರ್ ನಲ್ಲಿ ಚಲಿಸುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಗಂಭೀರವಾದ ದಾ'ಳಿ ನಡೆಸಿದ್ದಾರೆ. ಮತ್ತೊಂದು ಸ್ಕೂಟರ್ ನಲ್ಲಿ ಬಂದ ತಂಡವೊಂದು ಈ ಯುವಕನ ಮೇಲೆ ದಾಳಿ ನಡೆಸಿದ ಘಟನೆ ಇಂದು ಸಂಜೆ ನಡೆದಿದೆ.
ದುಷ್ಕರ್ಮಿಗಳಿಂದ ಗಾಯಗೊಂಡ ಯುವಕ ಸುಮಾರು ೨೮ ವರ್ಷ ಪ್ರಾಯದ ಯುವಕನಾಗಿದ್ದು ಐದು ಮಂದಿ ಈತನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ಒರ್ವ ಪೋಲಿಸರ ಕೈಗೆ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ಪೋಲಿಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
0 Comments